ಚಿನ್ನದ ಪದಕ ಪಡೆದ ಸವಿತಾ ಹೂಗಾರ : ಹೂಗಾರ ಸಮಾಜದಿಂದ ಸನ್ಮಾನ

Lead AnalystSite Administrator
Release DateFebruary 22, 2026
Intel Density5 min read
Signal Output:
ಚಿನ್ನದ ಪದಕ ಪಡೆದ ಸವಿತಾ ಹೂಗಾರ : ಹೂಗಾರ ಸಮಾಜದಿಂದ ಸನ್ಮಾನ

ಬೀದರ:  ಎಂ.ಟೆಕ್‌ ಪದವಿಯಲ್ಲಿ ಚಿನ್ನದ ಪದಕ ಪಡೆದು ಪ್ರಥಮ ಸ್ಥಾನ ಪಡೆದ ಸವೀತಾ ಹೂಗಾರ ಅವರನ್ನು ಅಖಿಲ ಕರ್ನಾಟಕ ಹೂಗಾರ ಮಹಾಸಭಾ ರಾಜ್ಯ ಹಾಗೂ ಬೀದರ ಜಿಲ್ಲಾ ಘಟಕದಿಂದ ರವಿವಾರ ಸನ್ಮಾನಿಸಲಾಯಿತು.

ಬೀದರ ನಗರದ ಗುಂಪಾ ಬಡಾವಣೆಯಲ್ಲಿನ ನಿವಾಸಕ್ಕೆ ಭೇಟಿನೀಡಿದ ಹೂಗಾರ ಸಮಾಜ ಮುಖಂಡರು, ಇತ್ತೀಚಿನ ದಿನಗಳಲ್ಲಿ ಹೂಗಾರ ಸಮುದಾಯದ ಮಕ್ಕಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಶಿಕ್ಷಣಕ್ಕೆ ಪ್ರಮುಖ ಆದ್ಯತೆ ನೀಡುತ್ತಿರುವುದು ಸಂತಸ ಮೂಡಿಸಿದೆ. ಸವಿತಾ ಹೂಗಾರ ಮದುವೆಯಾಗಿ ಮಕ್ಕಳಾದ ನಂತರವೂ ಸಂಸಾರ ಜೊತೆಗೆ ಉನ್ನತ ಶಿಕ್ಷಣ ಪಡೆದು ಬೆಳಗಾವಿಯ ವಿಟಿಯು ವಿಶ್ವ ವಿದ್ಯಾಯಲದಲ್ಲಿ ನಡೆದ 25ನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲರಾದ ಥಾವರಚಂದ್‌ ಗೆಹಲೋತ್ ಅವರಿಂದ ಚಿನ್ನದ ಪದಕ ಹಾಗೂ ಪ್ರಮಾಣ ಪತ್ರ ಪಡೆದಿರುವುದು ಹೂಗಾರ ಸಮಾಜ ಅಭಿನಂದನೆ ಸಲ್ಲಿಸುತ್ತದೆ‌ ಎಂದು ಮುಖಂಡರು ತಿಳಿಸಿದರು.

ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾ ರಾಜ್ಯ ಅಧ್ಯಕ್ಷರಾದ ಶಂಕರ ಹೂಗಾರ, ಪ್ರಧಾನ ಕಾರ್ಯದರ್ಶಿಗಳಾದ ಉಮೇಶ ಹೂಗಾರ ಗದಗ ಅವರು ಕೂಡ ಅಭಿನಂದನೆ ಸಲ್ಲಿಸಿದ್ದಾರೆ. 

ಸನ್ಮಾನ ಸಂದರ್ಭದಲ್ಲಿ  ಅಖಿಲ ಕರ್ನಾಟಕ ಹೂಗಾರ ಸೇವಾ ಮಹಾಸಭಾ ರಾಜ್ಯ ಸಹ ಕಾರ್ಯದರ್ಶಿ  ದುರ್ಯೂಧನ ಹೂಗಾರ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಶೋಕ ಹೂಗಾರ, ಬೀದರ ಜಿಲ್ಲಾಧ್ಯಕ್ಷರಾದ ರಾಜಕುಮಾರ ಹೂಗಾರ, ರಾಜ್ಯ ಕಮಿಟಿ ಸದಸ್ಯ ಕಾಶಿನಾಥ ಹೂಗಾರ, ಬಸವಕಲ್ಯಾಣ ಅಧ್ಯಕ್ಷ ವಿಠಲರಾವ ಹೂಗಾರ ಇದ್ದರು.