ಕಾರಂಜಾ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗ ಸಾವು*

Lead AnalystSite Administrator
Release DateFebruary 17, 2026
Intel Density5 min read
Signal Output:

*ಕಾರಂಜಾ ಕಾಲುವೆಯಲ್ಲಿ ಕಾಲು ಜಾರಿ ಬಿದ್ದು ತಂದೆ-ಮಗ ಸಾವು*

*ಮಗನ ರಕ್ಷಣೆಗೆ ಹೋದ ತಂದೆ ಸೇರಿ ಇಬ್ಬರು ನೀರಿನಲ್ಲಿ ಮುಳುಗಿ ಸಾವು*

ಭಾಲ್ಕಿ ತಾಲೂಕಿನ ಬ್ಯಾಲಹಳ್ಳಿ ಗ್ರಾಮದ ಕಾರಂಜಾ ಕಾಲುವೆಯಲ್ಲಿ ಘಟನೆ

ಹಳ್ಳೆಖೇಡ್(ಬಿ) ಗ್ರಾಮದ ವಿಶ್ವನಾಥ್ ಜಮಾದಾರ್(50) ಅಮರೇಶ್(23)‌ ಮೃತ ದುರ್ದೈವವಿಗಳು

ಬೀದರ್‌ನಲ್ಲಿ ಸಿಮೆಂಟ್ ಖಾಲಿ ಮಾಡಿ ವಾಪಸ್ ಹಳ್ಳಿಖೇಡ್‌ಗೆ ಹೋಗ್ತಾ ಇದ್ದ ತಂದೆ-ಮಗ

ಈ ವೇಳೆ ಕಾಲುವೆಗೆ ಇಳಿದು ಕೈ-ಕಾಲು, ಮುಖ ತೊಳೆದುಕೊಳ್ತಿದ್ದ ಅಮರೇಶ್

ಆಗ ಆಯತಪ್ಪಿ ಕಾಲು ಜಾರಿ ಕಾಲುವೆಯಲ್ಲಿ ಬಿದ್ದ ಅಮರೇಶ್

ಮಗ ಕಾಲುವೆಯಲ್ಲಿ ಬಿದ್ದಿದ್ದನ್ನು ಕಂಡ ತಂದೆ ವಿಶ್ವನಾಥ್ ಮಗನನ್ನು ರಕ್ಷಸಿಲು ಹೋದಾಗ ಆತನು ಕೂಡ ನೀರುಪಾಲು

ಸ್ಥಳಕ್ಕೆ ಪೋಲಿಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ

ಇಬ್ಬರ ಮೃತದೇಹ ಹೊರತೆಗೆದ ಅಗ್ನಿಶಾಮಕ ‌ಸಿಬ್ಬಂದಿ, ಹಳ್ಳಿಖೇಡ(ಬಿ) ಪಟ್ಟಣದ ಆಸ್ಪತ್ರೆ ಮುಂದೆ ಕುಟುಂಬಸ್ಥರ ಆಕ್ರಂದನ

ಧನ್ನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ