ಬಸವಕಲ್ಯಾಣ : ವ್ಯಕ್ತಿಯ ಕಾಲುಗಳ ಮೇಲೆ ಹರಿದ ರಥ

ವರದಿಗಾರರುSite Administrator
ಪ್ರಕಟಣೆ (IST)
ಅಪ್ಡೇಟ್ (IST)
ಓದುವ ಸಮಯ5 min read
ಹಂಚಿಕೊಳ್ಳಿ:
ಬಸವಕಲ್ಯಾಣ : ವ್ಯಕ್ತಿಯ ಕಾಲುಗಳ ಮೇಲೆ ಹರಿದ ರಥ

ಬಸವಕಲ್ಯಾಣ : ವ್ಯಕ್ತಿಯ ಕಾಲುಗಳ ಮೇಲೆ ಹರಿದ ತೇರು

ಬಸವಕಲ್ಯಾಣ: ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೀತ್ಸವ ನಿಮಿತ್ಯ ಗುರುವಾರ ಮುಂಜಾನೆ ನಡೆದ ರಥೋತ್ಸವದಲ್ಲಿ ಅವಘಡ ಸಂಭವಿಸಿದ್ದು, ರಥದ ಚಕ್ರಕ್ಕೆ ಸಿಲುಕಿ ಇಬ್ಬರ ಕಾಲುಗಳಿಗೆ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರುವಂತೆ ಆಗಿದೆ.

ರಥೋತ್ಸವದ ಅವಘಡದಲ್ಲಿ ಧನರಾಜ ಚಾಕೂರೆ ಹಾಗೂ ರಿಷಬ್ ಅವರ ಕಾಲುಗಳಿಗೆ ಗಂಭೀರ ಗಾಯಗೊಂಡ ಕುರಿತು ಮಾಹಿತಿ ಲಭ್ಯವಾಗಿದೆ. ನೂಕುನುಗಲ ಮಧ್ಯೆ ರಥ ಎಳೆಯುವ ಮಧ್ಯದಲ್ಲಿ ಈ ಅವಘಡ ಸಂಭವಿಸಿದೆ.  ಧನರಾಜ್ ಎಂಬುವವರ ಎರಡು ಕಾಲಿಗೆ ಗಂಭೀರ ಗಾಯಗಳಾಗಿದೆ. ಇನ್ನೋರ್ವ ವ್ಯಕ್ತಿಗೂ ಗಾಯಗಳಾಗಿದೆ.

ಅದ್ದೂರಿ ಜಾತ್ರೆ ನಡೆಯುವ ಮಧ್ಯದಲ್ಲಿ ಬಸವಭಕ್ತರು ಉತ್ಸಾಹದಿಂದ ರಥವನ್ನು ಎಳೆಯುತ್ತಿದ್ದರು. ಈ ವೇಳೆ ಏಕಾಏಕಿ ನೂಕು ನುಗ್ಗಲು, ತಳ್ಳಾಟ ಆಗಿದ್ದರಿಂದ ಈ ದುರ್ಘಟನೆ ನಡೆದಿದೆ. ಗಾಯಾಳುಗಳನ್ನು ಬಸವಕಲ್ಯಾಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಓರ್ವ ಗಾಯಾಳುವನ್ನು ಕಲ್ಬುರ್ಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ.